Saturday, February 25, 2017

ವಿಜಯತ್ತೆಯ ವಿವೇಕವಾಣಿ

ನಮ್ಮ ವಿಜಯತ್ತೆ ಅನುಭವಿಗಳು. ದೇಶ ವಿದೇಶ ಸುತ್ತಿದವರು. ಅನೇಕ ಪುಸ್ತಕಗಳನ್ನು ಓದಿದವರು.ತಮಗೆ ಸರಿ ಅನಿಸಿದ್ದನ್ನು ಆತ್ಮೀಯವಾದ ಭಾಷೆಯಲ್ಲಿ
ಹೇಳಬಲ್ಲವರು. ಅವರು ಆಗಾಗ ಹೇಳಿದ ಮಾತುಗಳೇ -ವಿಜಯತ್ತೆಯ ವಿವೇಕವಾಣಿ ಮೊನ್ನೆ ಸಹೋದ್ಯೋಗಿಯೊಬ್ಬರ ಮಾತುಗಳಿಂದ ಬೇಜಾರಾಗಿದ್ದೆ. ಯಾವತ್ತೂ ಉದ್ಯೋಗದ ಟೆಂಷನ್ಗಳನ್ನು ಮನೆಗೆ ತರದ ನಾನು, ಸಪ್ಪೆ ಮುಖ ಹೊತ್ತು ತಿರುಗುತ್ತ ಮನೆಯವರಿಂದ ಮಗನಿಂದ ಬೈಸಿಕೊಂಡಿದ್ದೆ. ವಿಜಯತ್ತೆ ಕೇಳಿದಾಗ ಸಹೋದ್ಯೋಗಿಯ ನುಡಿಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿದೆಯೆಂದು ಹೇಳಿದೆ. ಆಗ ಅವರು ಹೇಳಿದ್ದು. ನಮ್ಮ ಮನಸ್ಸು ಒಂದು ಚೌಕಟ್ಟಿನಂತೆ. ಅದರಲ್ಲಿ ಬೇಡದಮನ ನೋಯಿಸುವ ವಿಚಾರಗಳು ,ಆಗಿ ಹೋದ ಘಟನೆಗಳು ಕಪ್ಪು ಚುಕ್ಕೆಯಂತೆ ತುಂಬಿರುತ್ತವೆ. ಬೇರೆಯವರು ನಮ್ಮನ್ನು ನೋಯಿಸಿದಾಗ ಅದನ್ನು undo ಮಾಡಲಾಗುವುದಿಲ್ಲ ಆದರೆ ಚೌಕಟ್ಟನ್ನು ಹಿಗ್ಗಿಸಿದರೆ ಆ ಕಪ್ಪು ಚುಕ್ಕೆ ಒಂದು ಮೂಲೆಗೆ ಸರಿಯುತ್ತದೆ. ನಮ್ಮ ಮನಸ್ಸನ್ನು ವಿಶಾಲ ಮಾಡಿಕೊಂಡರೆ ಇಂಥ ಮನ ನೋಯಿಸುವ ಮಾತುಗಳು ಪಕ್ಕಕ್ಕೆ ಹೋಗಿ ಬೇರೆಯ ಸುವಿಚಾರಗಳಿಗೆ ಮನಸ್ಸಿನಲ್ಲಿ ಸ್ಥಳ ದೊರೆಯುತ್ತದೆ.

1 comment:

  1. Nothing can be simpler than this.... very valued lesson for all aged.

    ReplyDelete